ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಪರಸಾಪುರ ಗ್ರಾಮದ ಮನೆಗಳ ಗೋಡೆಗಳು ಕಲ್ಲು ಗಣಿಗಾರಿಕೆಯಿಂದಾಗಿ ಬಿರುಕು ಬಿಡುತ್ತಿರುವ ವರದಿ (ಪ್ರ.ವಾ., ಫೆ. 12) ಓದಿ ಆತಂಕವಾಯಿತು. ಹೀಗೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜನಸಾಮಾನ್ಯರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕಲ್ಲು ಗಣಿಗಾರಿಕೆಗಾಗಿ ನಡೆಯುವ ಸ್ಫೋಟದಿಂದ ಜಮೀನುಗಳ ಫಲವತ್ತತೆ ಕಡಿಮೆಯಾಗಿ ಸಾಗುವಳಿ ಭೂಮಿಯು ಬಂಜರು ಭೂಮಿಯಾಗುತ್ತಿದೆ.