ಕೋವಿಡ್ ಸಾಂಕ್ರಾಮಿಕದಿಂದ 9 ತಿಂಗಳಿನಿಂದ ಯಾತನೆ ಪಡುತ್ತಿರುವ ಜನರಿಗೆ ಇದು ಗಾಯದ ಮೇಲಿನ ಬರೆಯಂತೆ. ಬಂದ್ ಮಾಡಿ ಎಲ್ಲರಿಗೂ ತೊಂದರೆ ಕೊಡುವ ಬದಲು ಶಾಸಕರು, ಸಚಿವರ ಮನೆಗಳಿಗೆ ಮುತ್ತಿಗೆ, ಅಧಿವೇಶನಕ್ಕೆ ತಡೆ, ಸಭೆ ಸಮಾರಂಭಗಳಿಗೆ ಬರುವ ನಾಯಕರಿಗೆ ಘೇರಾವ್, ಕಪ್ಪು ಬಟ್ಟೆ ಧರಿಸಿ ಶಾಂತಿಯುತ ಮೆರವಣಿಗೆಯಂತಹ ಪ್ರತಿಭಟನಾ ಮಾರ್ಗಗಳನ್ನು ಹಿಡಿಯುವುದು ಒಳ್ಳೆಯದು. ದಯವಿಟ್ಟು ಈ ಬಂದ್ಗಳನ್ನು ಬಂದ್ ಮಾಡಿ ಪುಣ್ಯ ಕಟ್ಟಿಕೊಳ್ಳಿ.