ಬದಲಾದ ಪರಿಸ್ಥಿತಿಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದಾಗ ಸುಮಲತಾ ಅವರ ತಾಳ್ಮೆಯ ನಡೆ ಆದರ್ಶವಾದುದು. ತಮ್ಮ ವಿರುದ್ಧ ಕೆಲವರು ನಾಲಿಗೆಯನ್ನು ಹರಿಯಬಿಟ್ಟಾಗಲೂ ಧೃತಿಗೆಡದೆ ಸಹನಶೀಲರಾಗಿ ವರ್ತಿಸಿದರು. ಪುರುಷ ಪ್ರಧಾನ ಸಮಾಜವು 21ನೇ ಶತಮಾನದಲ್ಲಿಯೂ ಸಮಾನತೆಯನ್ನು ಕೊಡಲು ಏನೆಲ್ಲ ಅಡೆತಡೆಯನ್ನೊಡ್ಡುತ್ತದೆ ಎಂಬುದಕ್ಕೆ ಅವರ ವಿರುದ್ಧ ವ್ಯಕ್ತವಾಗುತ್ತಿರುವ ಹತಾಶೆಯ ಮಾತುಗಳೇ ಸಾಕ್ಷಿ. ಪುರುಷ ರಾಜಕಾರಣಿಗಳು ಇನ್ನಾದರೂ ಸುಮಲತಾ ಅವರ ನಡೆಯನ್ನು ನೋಡಿ ಕಲಿಯಲಿ.