ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಮಾದರಿ ನಡೆ

Last Updated 5 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಸುಮಲತಾ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅಂಬರೀಷ್‌ ಅವರ ಬಾಳಸಂಗಾತಿಯಾಗಿ ಪತಿಯ ಯಶೋಮಾರ್ಗದಲ್ಲಿ ದೀವಟಿಗೆಯಾದವರು. ಪತಿಯು ಅನಾರೋಗ್ಯಪೀಡಿತರಾಗಿದ್ದಾಗ ಮತ್ತು ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ದಿಟ್ಟ ನಿಲುವುಗಳು ಪ್ರಶಂಸನೀಯವಾದವು.

ಬದಲಾದ ಪರಿಸ್ಥಿತಿಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದಾಗ ಸುಮಲತಾ ಅವರ ತಾಳ್ಮೆಯ ನಡೆ ಆದರ್ಶವಾದುದು. ತಮ್ಮ ವಿರುದ್ಧ ಕೆಲವರು ನಾಲಿಗೆಯನ್ನು ಹರಿಯಬಿಟ್ಟಾಗಲೂ ಧೃತಿಗೆಡದೆ ಸಹನಶೀಲರಾಗಿ ವರ್ತಿಸಿದರು. ಪುರುಷ ಪ್ರಧಾನ ಸಮಾಜವು 21ನೇ ಶತಮಾನದಲ್ಲಿಯೂ ಸಮಾನತೆಯನ್ನು ಕೊಡಲು ಏನೆಲ್ಲ ಅಡೆತಡೆಯನ್ನೊಡ್ಡುತ್ತದೆ ಎಂಬುದಕ್ಕೆ ಅವರ ವಿರುದ್ಧ ವ್ಯಕ್ತವಾಗುತ್ತಿರುವ ಹತಾಶೆಯ ಮಾತುಗಳೇ ಸಾಕ್ಷಿ. ಪುರುಷ ರಾಜಕಾರಣಿಗಳು ಇನ್ನಾದರೂ ಸುಮಲತಾ ಅವರ ನಡೆಯನ್ನು ನೋಡಿ ಕಲಿಯಲಿ.

- ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT