ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2021- 22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಇದೇ ಏಪ್ರಿಲ್ 9ಕ್ಕೆ ಮುಕ್ತಾಯಗೊಳಿಸಿ, ಬೇಸಿಗೆ ರಜೆ ನೀಡಿ ಮೇ 16ರಿಂದ ಮುಂದಿನ ಶೈಕ್ಷಣಿಕ ವರ್ಷ ಪುನರಾರಂಭ ಮಾಡಲು ಸರ್ಕಾರ ನಿರ್ಧರಿಸಿದೆ. ಬೇಸಿಗೆಯ ಅವಧಿಯಲ್ಲಿ ಮಕ್ಕಳು ಬಿಸಿಲಿನ ತಾಪಮಾನದಿಂದ ಅನಾರೋಗ್ಯಕ್ಕೆ ಒಳಪಡುವ ಸಂಭವ ಹೆಚ್ಚಾಗಿರುವುದರಿಂದ ಈ ಕ್ರಮ ಸೂಕ್ತವಾಗಿದೆ. ಅಲ್ಲದೆ ‘ಕಲಿಕಾ ಚೇತರಿಕೆ’ (ಸೇತುಬಂಧ) ಕಾರ್ಯಕ್ರಮ ಆಯೋಜಿಸಿ ಮಕ್ಕಳ ಕಲಿಕಾ ಪುನರ್ಮನನಕ್ಕೆ ಒಳ್ಳೆಯ ಮಾರ್ಗ ರೂಪಿಸಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಲ್ಲಿ ಅಳವಡಿಸಿಕೊಂಡು, ಯೋಜನೆಯನ್ನು ಯಶಸ್ವಿಗೊಳಿಸುವುದು ಶಾಲೆಗಳ ಜವಾಬ್ದಾರಿಯಾಗಿದೆ.