ಮಹಿಳೆಯರ ಪ್ರವೇಶದಿಂದ ದೇಗುಲ ಅಪವಿತ್ರಗೊಳ್ಳವುದಾದರೆ ಅದನ್ನು ನೋಡಿಕೊಳ್ಳಲು ಸರ್ವಶಕ್ತ ಅಯ್ಯಪ್ಪ ಸ್ವಾಮಿ ಇದ್ದಾನೆ. ದರ್ಶನಕ್ಕೆ ಬಂದವರು ಯೋಗ್ಯರೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಸ್ವಾಮಿಗೇ ಬಿಡುವಷ್ಟು ಕೂಡಾ ನಮ್ಮಲ್ಲಿ ಆಸ್ತಿಕತೆ ಇಲ್ಲವೇ? ದೇವರ ಹೆಸರಿನಲ್ಲಿ ದಲ್ಲಾಳಿಗಿರಿ ನಡೆಸಿ, ನೂರಾರು ಜಾತಿ– ಉಪಜಾತಿಗಳನ್ನು ಸೃಷ್ಟಿಸಿದ್ದೇವೆ. ಈ ಪರಂಪರೆಗೆ ಕೊನೆ ಹಾಡಲು ಇನ್ನೆಷ್ಟು ಬಸವಣ್ಣ, ಬುದ್ಧರಂತಹವರು ಹುಟ್ಟಿ ಬರಬೇಕು? ನೆಲದ ಕಾನೂನನ್ನು ಹಾಗೂ ನಾಡಿನ ಸಂವಿಧಾನವನ್ನು ಗೌರವಿಸುವುದು ನಮ್ಮ ಹೊಣೆಗಾರಿಕೆಯಲ್ಲವೇ?