‘ಸ್ವಾಮೀಜಿಗಳು ಮದುವೆ ಆಗಿಯೇ ಮಠ ನಡೆಸಲಿ’ ಎಂದು ಅಭಿಪ್ರಾಯಪಟ್ಟಿದ್ದಾರೆ ಚಿತ್ತಾಪುರ ತಾಲ್ಲೂಕಿನ ಕರದಾಳ್ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ (ಪ್ರ.ವಾ., ಸೆ. 12). ನಿಜ, ಸ್ವಾಮೀಜಿಯ ಅಭಿಪ್ರಾಯವು ಉಳಿದ ಮಠದ ಸ್ವಾಮಿಗಳು ಹಾಗೂ ಅವರ ಭಕ್ತಜನ ಗಂಭೀರವಾಗಿ ಪರಿಗಣಿಸಲು ಅರ್ಹವಾಗಿದೆ. ರಾಮಕೃಷ್ಣ ಪರಮಹಂಸ ಮತ್ತು ಶಾರದಾಮಣಿ ದೇವಿಯವರ ‘ಆತ್ಮಸಂಗಾತ’ದಂತಹ ದಾಂಪತ್ಯ ಇರಲಿಲ್ಲವೆ? ಸಂಸಾರ ಜೀವನದ ಬಗ್ಗೆ ಕವಿ ಕುವೆಂಪು ವಾಣಿ ಅಭಯಪ್ರದಾನವಾಗಿದೆ: ‘ಜೀವ ರಥೋತ್ಸವವಿದನಣಕಿಸದಿರು, ಎಲೆ ಸಂನ್ಯಾಸಿ!
ಸಾರಥಿಯನು ನೋಡಾದರು ಬಾ, ತೇರನು ಎಳೆಯುವ ಸಂನ್ಯಾಸಿ!’