ರಾಜ್ಯದಲ್ಲಿ ಇತ್ತೀಚೆಗೆ ಸುದ್ದಿ ಮಾಡಿದ ಕೆಲವು ಶಿಕ್ಷಕರನ್ನು ಪ್ರಸ್ತಾಪಿಸುತ್ತಾ ‘ಶಿಕ್ಷಕರು ಏಕೆ ಹೀಗೆ ನಡೆದುಕೊಳ್ಳುತ್ತಾರೆ?’ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಪ್ರಶ್ನಿಸಿದ್ದಾರೆ (ಪ್ರ.ವಾ., ಜ. 22). ಶಿಕ್ಷಕನನ್ನು ಕೇವಲ ಕಲಿಸುವ ಕೆಲಸಕ್ಕೆ ಬಿಟ್ಟರೆ, ಆತ ಮಕ್ಕಳನ್ನು ದೇವರ ಸ್ವರೂಪದಲ್ಲಿ ಕಂಡು ಅವರಿಗೆ ಕಲಿಸುತ್ತಾನೆ. ಆದರೆ ಇತ್ತೀಚೆಗೆ ಹಾಗೆ ಆಗುತ್ತಿಲ್ಲ. ಶಿಕ್ಷಕ, ಮಕ್ಕಳಿಗೆ ಪಾಠ ಕಲಿಸುವುದರ ಜೊತೆಗೆ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾನೆ. ಶಾಲೆ, ಮಕ್ಕಳು, ಪೋಷಕರು, ಎಸ್ಡಿಎಂಸಿ ಸದಸ್ಯರು, ಮೇಲಧಿಕಾರಿಗಳು, ಇವರೆಲ್ಲರ ಮಾತುಗಳನ್ನು ಕೇಳುವುದರ ಜೊತೆಗೆ ತನ್ನ ಸಂಸಾರದ ಆಗುಹೋಗುಗಳನ್ನೂ ನಿಭಾಯಿಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ.