ಲೇಖಕರು ಹೇಳುವಂತೆ, ಇಂದಿನ ಅಧ್ಯಾಪಕರಲ್ಲಿ ಗುರುವಿನ ಗೆರೆ ದಾಟಿ ಆಚಾರ್ಯರಾಗುವಂಥವರು ಎಷ್ಟು ಮಂದಿ ಇದ್ದಾರೆ? ಅಂಕಗಳ ಬೇಟೆಯ ‘ಮೃಗಯಾ ವಿನೋದ’ದಲ್ಲಿ ತಲ್ಲೀನವಾಗಿರುವ ಇಂದಿನ ನಮ್ಮ ಉನ್ನತ ಶಿಕ್ಷಣವು, ಕುವೆಂಪು ಅವರ ಆಶಯಕ್ಕೆ ವಿರುದ್ಧವಾಗಿ, ನಮ್ಮ ವಿದ್ಯಾರ್ಥಿಗಳನ್ನು ಭತ್ತ ಬೆಳೆಯುವ ಗದ್ದೆಗಳನ್ನಾಗಿಸದೆ, ಆ ಬೆಳೆಯನ್ನು ತುಂಬುವ ಚೀಲಗಳನ್ನಾಗಿಸುತ್ತಿರುವುದು ವಿಪರ್ಯಾಸವಲ್ಲವೇ?