ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕರೊಬ್ಬರು ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದರು ಎಂಬ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸುದ್ದಿ (ಪ್ರ.ವಾ., ಡಿ. 14) ಓದಿ ಗಾಬರಿಗೆ ಒಳಗಾದೆ. ಮಕ್ಕಳಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಬೇಕಾಗಿದ್ದ ಶಿಕ್ಷಕರೇ ಹೀಗೆ ಅಡ್ಡದಾರಿ ಹಿಡಿದಿರುವುದು ದುರಂತದ ಸಂಗತಿ. ಐಷಾರಾಮಿ ಬದುಕಿನ ಹಂಬಲ ಎಂಥವರನ್ನೂ ಹಾದಿ ತಪ್ಪಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ.