ಇದೇ 19ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಧರಣಿ-ಪ್ರತಿಭಟನೆ, ಬಹಿಷ್ಕಾರಗಳಿಗೆ ತುತ್ತಾಗಿ, ಕಾಟಾಚಾರಕ್ಕೆ ನಡೆಯದಿರಲಿ. ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಮತ್ತು ಮಾನವಶಕ್ತಿ ವ್ಯಯಿಸಿ ತಯಾರಾಗಿರುವ ಅನೇಕ ಪ್ರಮುಖ ಅಧ್ಯಯನ ವರದಿಗಳು, ತನಿಖಾ ವರದಿಗಳು ರಾಜಕೀಯ ಕಾರಣಗಳಿಗಾಗಿ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ಈವರೆಗೂ ಅಧಿವೇಶನದಲ್ಲಿ ಮಂಡನೆಯಾಗಿ ಚರ್ಚಿತವಾಗದೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಈ ಅಧಿವೇಶನದಲ್ಲಾದರೂ ಅವು ಮಂಡಿತವಾಗಿ, ಅವುಗಳ ಕುರಿತು ಗಂಭೀರ, ವ್ಯಾಪಕ ಮತ್ತು ಅರ್ಥಪೂರ್ಣ ಚರ್ಚೆಯಾಗಬೇಕಾದ
ಅವಶ್ಯಕತೆಯಿದೆ.