ತಮ್ಮ ನಾಯಿ ಸತ್ತಾಗ, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ನೆನಪಾದಂತೆಯೇ, ಮನುಷ್ಯರು ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಂಡಾಗಲೂ, ಅವರ ಹಕ್ಕು- ಗೌರವಗಳಿಗೆ ಅಡ್ಡಿ, ಆತಂಕ ಎದುರಾದಾಗಲೂ ಕಾನೂನು, ಸಂವಿಧಾನ, ಮಾನವ ಹಕ್ಕುಗಳು ನೆನಪಾಗಲಿ. ಜವಾಬ್ದಾರಿ ಮರೆಯುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಇದೇ ರೀತಿ ಕಠಿಣ ಕ್ರಮ ಕೈಗೊಳ್ಳಲಿ.