ನಮ್ಮ ಭಾರತವು ಮತನಿರಪೇಕ್ಷ ಗಣರಾಜ್ಯ ಎಂಬ ವಿಶೇಷಣ ಹೊಂದಿದೆ. ಇಲ್ಲಿ ದೇವಸ್ಥಾನಗಳಿವೆ, ಮಸೀದಿಗಳಿವೆ, ಚರ್ಚುಗಳಿವೆ. ಸರ್ಕಾರಕ್ಕೆ ಮತಗಳ ಬಗ್ಗೆ ಸಂಬಂಧವಿರಬಾರದು ಎನ್ನುತ್ತದೆ ಸೆಕ್ಯುಲರಿಸಂ. ಮತ ಅಥವಾ ಜಾತಿ ವಿಷಯಗಳು ಆಡಳಿತದಿಂದ ದೂರವಿರಬೇಕು, ಯಾವುದೇ ಕಾರಣದಿಂದಲೂ ಜಾತಿ, ಮತಗಳು ಸರ್ಕಾರದ ಆಡಳಿತದಲ್ಲಿ ತಲೆ ಹಾಕಬಾರದು ಎಂದು ತಿಳಿದುಬರುತ್ತದೆ. ಯಾವುದೇ ಪಕ್ಷವು ಗೆದ್ದು ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರ ಅದು ಪಕ್ಷದ ಸರ್ಕಾರ ಆಗಿರುವುದಿಲ್ಲ. ಅದು ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮಾತ್ರ ಆಗಿರುತ್ತದೆ. ಇದು ಸಂವಿಧಾನದ ಆಶಯವೂ ಆಗಿದೆ. ಇನ್ನು ಭಾರತದಲ್ಲಿರುವ ಮತಗಳು ಅವುಗಳ ಪಾಡಿಗೆ ಅವು ಇರಬೇಕು. ಪೂಜೆ, ಪ್ರಾರ್ಥನೆ ಅವುಗಳ ಕೆಲಸ ಅಲ್ಲ. ಇಂತಹವುಗಳ ವ್ಯವಹಾರವು ಸರ್ಕಾರಕ್ಕೆ ಏಕೆ ಬೇಕು?