ಆದರೆ, ಕಳಪೆ ಕಾಮಗಾರಿ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು? ಅಂದರೆ, ಕಳಪೆ ಕಾಮಗಾರಿಯ ಲಾಭಾಂಶದಲ್ಲಿ ಪಾಲು ಪಡೆದವರನ್ನೂ ಪತ್ತೆ ಹಚ್ಚಿ ಅವರ ವಿರುದ್ಧ ಸಹ ಕ್ರಮ ಜರುಗಿಸಬೇಕು. ಲಾಭಕ್ಕೆ ಮಾತ್ರ ಪಾಲುದಾರರು, ಶಿಕ್ಷೆಗೆ ಬೇಡವೇ? ಅನ್ಯಾಯ, ಮೋಸದಿಂದ ಜನರ ತೆರಿಗೆಯ ಹಣವನ್ನು ಕೂತಲ್ಲೇ ನಿರಾತಂಕವಾಗಿ ಪಡೆದ ಪಾಲುದಾರರು ಯಾರೇ ಆಗಿರಲಿ, ಅವರಿಗೆ ಗರಿಷ್ಠ ಶಿಕ್ಷೆಯಾಗಬೇಕು