ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೆನ್ನು ಮೂಳೆ ಮುರಿದರೂ ಇನ್ನೂ ಮಮತಾ ಬ್ಯಾನರ್ಜಿ ಅವರಿಗೆ ಅದು ‘ತಲೆನೋವು’ ಆಗಿರುವುದು, ಬಿಹಾರದಲ್ಲಿ ಯುವನಾಯಕ ತೇಜಸ್ವಿ ಯಾದವ್, ಕಮ್ಯುನಿಸ್ಟ್ ಪಕ್ಷದ ಯುವ ಮುಂದಾಳು ಕನ್ಹಯ್ಯ ಕುಮಾರ್ ಅವರ ಗರ್ಜನೆಗಳೂ ಕಾಂಗ್ರೆಸ್ಸಿಗರ ಗಮನಕ್ಕೆ ಬರಲಿಲ್ಲವೇ? ಅಧಿಕಾರದಲ್ಲಿದ್ದಾಗಲೇ ಜನರ ವಿಶ್ವಾಸ ಕಳೆದುಕೊಂಡಿದ್ದ ಕಾಂಗ್ರೆಸ್, ಆಗೊಮ್ಮೆ ಈಗೊಮ್ಮೆ ನೀಡುವ ಪತ್ರಿಕಾ ಹೇಳಿಕೆಗಳು, ಟ್ವಿಟರ್ನಲ್ಲಿನ ಬಾಲಿಶ ಟೀಕೆಗಳು ಜನರ ವಿಶ್ವಾಸ ಗಳಿಸಬಲ್ಲವೇ?