ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಸಂಪಾದಕೀಯವು (ಪ್ರ.ವಾ., ಆ. 19) ಸಂದರ್ಭೋಚಿತವೂ ವಿಚಾರಪರವೂ ಆಗಿದೆ. ನ್ಯಾಯಾಂಗದ ಶಕ್ತಿ, ಘನತೆಯನ್ನು ಎತ್ತಿ ಹಿಡಿಯುವ ಮೂಲಕವೇ ಸಾರ್ವಜನಿಕರ ಹಲವು ಹಕ್ಕುಗಳನ್ನು ರಕ್ಷಿಸಲು ಕಾರಣರಾದ ನ್ಯಾಯವಾದಿ ಪ್ರಶಾಂತ್ ಭೂಷಣ್, ನ್ಯಾಯಾಲಯದ ಘನತೆಗೆ ಕುಂದುಂಟು ಮಾಡುವ ದುರುದ್ದೇಶ ಹೊಂದಿರುತ್ತಾರೆ ಎಂಬುದು ಸುಲಭದಲ್ಲಿ ನಂಬಬಹುದಾದ ವಿಚಾರವಲ್ಲ.