ಕಲ್ಲು, ಗ್ರಾನೈಟ್, ಕೆಂಪುಗಲ್ಲು, ಮರಳು ಇತ್ಯಾದಿಗಳಿಗಾಗಿ ಅಕ್ರಮ ಕ್ವಾರಿಗಳು ಆರಂಭವಾಗಿ ಎರಡು ದಶಕಗಳೇ ಸಂದಿವೆ. ಇದೀಗ ಅದು ಪರಾಕಾಷ್ಠೆಗೆ ತಲುಪುತ್ತಿದೆಯಷ್ಟೆ. ಜನಜೀವನದ ಆರೋಗ್ಯ, ಕೃಷಿಯ ಉತ್ಪಾದನೆ, ಅರಣ್ಯ ಹಾಗೂ ಪರಿಸರದ ಸುರಕ್ಷತೆ- ಇವೆಲ್ಲವನ್ನೂ ಧಿಕ್ಕರಿಸಿ, ಕಾನೂನುಗಳನ್ನೆಲ್ಲ ಮುರಿಯುತ್ತ ಸಾಗಿರುವ ಉದ್ಯಮವಿದು. ಮಲೆನಾಡು ಹಾಗೂ ಕರಾವಳಿಯ ತುಂಬೆಲ್ಲ ಗಣಿಗಾಯಗಳನ್ನು ಸೃಷ್ಟಿಸಿ, ಅಂತರ್ಜಲ ಬತ್ತಿಸಿ, ವನ್ಯಜೀವಿ ಆವಾಸಸ್ಥಾನ ಕಾಡುಗಳನ್ನು ಛಿದ್ರ ಮಾಡಿ, ತೊರೆ-ಹಳ್ಳಗಳನ್ನು ಒಣಗಿಸಿ, ಗೋಮಾಳ-ಕೆರೆಗಳನ್ನು ಬರಡಾಗಿಸಿ, ಪರಿಸರ
ಸಮತೋಲನವನ್ನೇ ದೂಳೆಬ್ಬಿಸುತ್ತಿವೆ!