ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶ್ಯಾವಿಗೆ ಒಣಗಲು ಹಾಕಿದರೆಂಬ ಕಾರಣಕ್ಕೆ ಗುತ್ತಿಗೆ ಆಧಾರದ ಕಾರ್ಮಿಕ ಮಹಿಳೆಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪ್ರತಿನಿಧಿಗಳು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಕೇವಲ 200 ರೂಪಾಯಿಗಾಗಿ ಇಡೀ ದಿನ ದುಡಿದು ಹೊಟ್ಟೆ ಹೊರೆಯುವ ಅವರ ಮೇಲೆ ಕ್ರಮ ಕೈಗೊಂಡವರು, ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ನೀಲಿಚಿತ್ರ ನೋಡುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ಅಮೆರಿಕದ ಕಾಂಗ್ರೆಸ್ವರೆಗೂ ವಿಸ್ತರಿಸಿದ ಮಹಾಶಯರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಹೇಳಲಿ.