ಮಲೆನಾಡಿನಲ್ಲಿ ಅಡಿಕೆ ಸಿಂಗಾರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಿಸುತ್ತಿರುವುದರಿಂದ ಜೇನು ನೊಣಗಳು ಸಾಯುತ್ತಿವೆ ಎಂದು ವರದಿಯಾಗಿದೆ (ಪ್ರ.ವಾ., ಫೆ. 16). ಈ ಸಮಸ್ಯೆ ಮಲೆನಾಡಿನಲ್ಲಿ ಮಾತ್ರವಲ್ಲ ಬಹುಪಾಲು ಕಡೆ ಇದೆ. ಮಾವಿನ ತೋಪುಗಳು ಇರುವ ಕಡೆ, ಮಾವು ಹೂ ಬಿಡುವ ಸಮಯದಲ್ಲಿ ಹೂಗಳು ಉದುರದಿರಲೆಂದು ರಾಸಾಯನಿಕವೊಂದನ್ನು ಸಿಂಪಡಿಸುತ್ತಾರೆ. ಆಗ ಲಕ್ಷಾಂತರ ಜೇನು ನೊಣಗಳು ಮಕರಂದ ಹೀರಲು ಹೋಗಿ ಪ್ರಾಣ ಬಿಡುತ್ತವೆ. ಇದೇ ರೀತಿ ಚೆಂಡು ಹೂಗಳಿಗೆ ಸಿಂಪಡಿಸುವ ರಾಸಾಯನಿಕದಿಂದಲೂ ಜೇನು ನೊಣಗಳು ಸಾಯುತ್ತಲೇ ಇವೆ. ಎಷ್ಟೋ ಬಾರಿ ಇಡೀ ಗೂಡಿನ ಎಲ್ಲ ಜೇನು ನೊಣಗಳೂ ಸತ್ತು ಗೂಡು
ಖಾಲಿಯಾದದ್ದನ್ನೂ ನೋಡಿದ್ದೇವೆ.