ಯಾರು ಎಷ್ಟು ನೀರನ್ನು ಸೆರೆ ಹಿಡಿದಿದ್ದಾರೆ ಎಂಬು ದರ ಸಮೀಕ್ಷೆಗೆ ಇಸ್ರೊ ನೆರವಾಗಬಹುದು. ಯಾಕೆ ಅಂಥ ದ್ದೊಂದು ಪ್ರಯೋಗವನ್ನು ಮಾಡಿ ನೋಡಬಾರದು? ಮಾಡದಿದ್ದರೆ, ಈ ಮಳೆಯಲ್ಲಿ ಮೇಲ್ಮಣ್ಣು, ಸರ್ಕಾರಿ ಗೊಬ್ಬರ, ರೈತರ ಶ್ರಮ ಎಲ್ಲವೂ ನೀರುಪಾಲಾಗಿ ಅಣೆಕಟ್ಟೆ ಸೇರಿ, ಅಲ್ಲಿ ಹೂಳು ತುಂಬಿ ರೈತರ ಭವಿಷ್ಯ ಇನ್ನಷ್ಟು ಕರಾಳ ಆದೀತು. ನಮ್ಮ ಶಾಸಕಾಂಗ ಹಾಗೂ ಕಾರ್ಯಾಂಗ ಅಂಥ ದೂರದರ್ಶಿತ್ವವನ್ನು ಪ್ರದರ್ಶಿಸಬೇಕು. ಅದನ್ನು ಬಿಟ್ಟು ತುರ್ತು ಪರಿಹಾರದ ನಾಟಕದಲ್ಲೇ ಮುಳುಗಿದ್ದರೆ ನಾಳಿನ ಕರ್ನಾಟಕಕ್ಕೆ ಅದು ಭಾರೀ ಹೊರೆಯಾದೀತು.