3. ಪ್ರವಾಹದಿಂದ ಸಂತ್ರಸ್ತರಾಗಿರುವ 14 ಕುಟುಂಬಗಳಿಗೆ ಬೆಳ್ತಂಗಡಿ ತಾಲ್ಲೂಕಿನ ಅಗರಿಮಾರು ಜಲಜಾಕ್ಷಿ ಎಂಬುವರು ತಮ್ಮ ಮನೆಯಲ್ಲೇ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಹೆಣ್ಣುಮಗಳ ಮಾತೃ ಹೃದಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಜಾತಿ, ಧರ್ಮ, ಬಡವ, ಬಲ್ಲಿದ ಎನ್ನುವ ಭೇದಭಾವ ಮೀರಿ ನಿಲ್ಲುವ ಇವರ ವಿಶ್ವಮಾನವ ಪರಿಗೆ ಕೈ ಮುಗಿಯಬೇಕು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವ ಸತ್ಯವನ್ನು ಎಲ್ಲರೂ ಅರಿಯಬೇಕು. ಮಾನವೀಯತೆಯ ಹಣತೆ ಎಲ್ಲರಿಗೂ ಬೆಳಕಿನ ದಾರಿ ತೋರಿಸಲಿ.