ಅನೇಕ ಕಷ್ಟ ಕೋಟಲೆಗಳನ್ನು, ಮಾನ ಅಪಮಾನಗಳನ್ನು ಅನುಭವಿಸಿ ಈ ದೇಶಕ್ಕೆ ಸಂವಿಧಾನ ರೂಪಿಸಿಕೊಟ್ಟ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಕುರಿತ ‘ಮಹಾನಾಯಕ’ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ಗೆ ಬೆದರಿಕೆ ಕರೆ ಬಂದಿರುವುದು ದುರದೃಷ್ಟಕರ. ಈ ಧಾರಾವಾಹಿಯ ಮೂಲಕ, ಅಂದಿನ ಸಾಮಾಜಿಕ ವ್ಯವಸ್ಥೆ, ಜಾತಿ ಪದ್ಧತಿ, ಅಸಮಾನತೆ, ಅನಿಷ್ಟ ಪದ್ಧತಿಗಳ ಚಿತ್ರಣ ಇಂದಿನ ಸಮಾಜಕ್ಕೆ ತಿಳಿಯುತ್ತಿದೆ. ಮನಃಪರಿವರ್ತನೆಗೆ ಇದು ದಾರಿದೀಪವಾಗಿದೆ.