ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ ಹೀಗೆ ಯಾವುದೇ ಪಕ್ಷದ ನೇತೃತ್ವದ ಹೊಸ ಸರ್ಕಾರ ರಚನೆಯಾದಾಗಲೂ ಏನೋ ಅಪರಾಧ ಮಾಡಿದ್ದಾರೆ ಎಂಬಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಲಾಗುತ್ತದೆ. ಇದು ಆಡಳಿತಕ್ಕೆ ಶೋಭೆ ತರುವ ನಡವಳಿಕೆಯಲ್ಲ. ಈ ಅಧಿಕಾರಿಗಳೆಲ್ಲ ಅರ್ಹತೆಯ ಆಧಾರದ ಮೇಲೆ ಆಯ್ಕೆಯಾಗಿರುತ್ತಾರೆ. ವಹಿಸಿದ ಜವಾಬ್ದಾರಿ ನಿರ್ವಹಿಸುತ್ತಾರೆ. ಜನಪ್ರತಿನಿಧಿಗಳಂತೆ ಐದು ವರ್ಷಗಳ ಅವಧಿಗೆ ಇದ್ದು ಹೋಗುವವರಲ್ಲ. ಸರ್ಕಾರ ಬದಲಾದ ಕೂಡಲೇ ಅಧಿಕಾರಿಗಳ ಸ್ಥಾನಪಲ್ಲಟವೂ ಆಗಬೇಕು ಎಂಬ ನಿಯಮ ಏನಾದರೂ ಇದೆಯೇ?