2018ರಲ್ಲಿ ಏಕಗವಾಕ್ಷಿಯಡಿ ಮತ್ತು 2020ರಲ್ಲಿ ಪ್ರಥಮ ಮುದ್ರಣಗೊಂಡ, ರಾಜ್ಯ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಮತ್ತು ಆಯ್ಕೆಯಾಗದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಹಂಪಿಯಲ್ಲಿನ ಸಾರ್ವಜನಿಕ ಗ್ರಂಥಾಲಯದ ಗ್ರಂಥಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರಿಂದ ಲೇಖಕ, ಪ್ರಕಾಶಕರಿಗೆ ತಮ್ಮ ಪ್ರಕಟಣೆ ಆಯ್ಕೆಯಾಗಿರುವುದನ್ನು ಹದಿನೈದು– ಇಪ್ಪತ್ತು ನಿಮಿಷಗಳಲ್ಲೇ ಗುರುತಿಸಲು ಸಾಧ್ಯವಾಗುವಂತಿತ್ತು. ಆಯ್ಕೆ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದುದರಿಂದ, ಆಯ್ಕೆಯಾಗದ ಪುಸ್ತಕದ ಬಗ್ಗೆ ಅವರಿಂದ ಸ್ಥಳದಲ್ಲಿಯೇ ವಿವರಣೆ ತಿಳಿಯಲು ಅನುಕೂಲವಿತ್ತು. ಸಾರ್ವಜನಿಕ ಗಂಥಾಲಯ ಇಲಾಖೆಯು ಆಯ್ಕೆಯಲ್ಲಿ ಇಂತಹ ಪಾರದರ್ಶಕತೆಯನ್ನು ಕಾಯ್ದುಕೊಂಡಿದ್ದು ಅತ್ಯಂತ ಶ್ಲಾಘನೀಯ.