ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಅವರು ಚಂದ್ರಶೇಖರ ಕಂಬಾರರಿಗೆ ಸನ್ಮಾನ ಮಾಡಲು ಏರ್ಪಡಿಸಿದ್ದ ಸಮಾರಂಭದಲ್ಲಿ (ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ) ಮಾತನಾಡುತ್ತಾ, ‘ಕನ್ನಡ ವಿಶ್ವವಿದ್ಯಾಲಯವನ್ನು ಯುಜಿಸಿಯಿಂದ ಬಿಡಿಸಬೇಕು. ಇದಕ್ಕೆ ಕಂಬಾರರು ದೆಹಲಿಯಲ್ಲಿ ಧ್ವನಿ ಎತ್ತಬೇಕು’ ಎಂದು ಕರೆ ಕೊಟ್ಟಿದ್ದಾರೆ(ಪ್ರ.ವಾ., ಬಳ್ಳಾರಿ ಆವೃತ್ತಿ, ನ. 23). ಈ ವಿಶ್ವವಿದ್ಯಾಲಯದ ಕುಲಪತಿಯಾಗಿ ರೂಸೊ, ಯುಜಿಸಿ, ಎಚ್ಆರ್ಡಿಯಿಂದ ಬಂದ ಕೋಟ್ಯಂತರ ರೂಪಾಯಿಗಳಲ್ಲಿ ‘ಕಟ್ಟಡಗಳನ್ನು ಕಟ್ಟಿ’ ಈಗ ಇದ್ದಕ್ಕಿದ್ದಂತೆ ಹೀಗೆ ಹೇಳಿಕೆ ಕೊಡುವುದು ಎಷ್ಟು ಸರಿ?