ಈ ಬಾರಿಯ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಿದ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ವಿಜಯದಶಮಿಯಂದು ನಾಡದೇವತೆ ಚಾಮುಂಡಿ ಮಾತೆಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಲ್ಲಿಯ ಚಾಮುಂಡೇಶ್ವರಿ ದೇಗುಲದಿಂದ ಮೈಸೂರಿನಲ್ಲಿರುವ ಅರಮನೆಗೆ ವಾಹನದಲ್ಲಿ ತರಲಾಯಿತು.
ಆದರೆ ಉತ್ಸವ ಮೂರ್ತಿಯನ್ನು ಹೊತ್ತ ವಾಹನಕ್ಕೆ ಯಾವುದೇ ತರಹದ ಹೂವಿನ ಅಲಂಕಾರ ಮಾಡಿರಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ವಾಹನಕ್ಕೆ ಅಲಂಕಾರ ಮಾಡಬೇಕೆಂಬುದು ಕಾರ್ಯಕ್ರಮದ ಉಸ್ತುವಾರಿ ಹೊತ್ತ ಅಧಿಕಾರಿಗಳಿಗೆ ಹೊಳೆಯಲಿಲ್ಲವೇ ಅಥವಾ ಅಸಡ್ಡೆ ಮನೋಭಾವವೇ? ಅತ್ಯಂತ ಸರಳವಾಗಿ ಆಚರಿಸುವುದು ಎಂದರೆ ಇದೇನೇ?