ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಕುಸಿತ: ಜನಜಾಗೃತಿ ಅಗತ್ಯ

Last Updated 14 ಮೇ 2019, 20:15 IST
ಅಕ್ಷರ ಗಾತ್ರ

ಬರಿದಾದ ಜಲಾಶಯಗಳ ಒಡಲು ಕುರಿತ ವರದಿ (ಪ್ರ.ವಾ., ಮೇ 13) ಸಕಾಲಿಕವಾಗಿದೆ.ಕೆರೆಗಳು, ಕಲ್ಯಾಣಿಗಳು ಅಂತರ್ಜಲದ ಜೀವಾಳ. ಜಾಗತೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಇವು ಮಾಯವಾಗಿವೆ. ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿದಿದೆ, ತಾಪಮಾನ ಹೆಚ್ಚಿದೆ. ಇದು, ಅಪಾಯದ ಎಚ್ಚರಿಕೆಯ ಕರೆಗಂಟೆ.

ಉಳಿದಿರುವ ಕೆರೆಗಳ ಹೂಳೆತ್ತುವ, ಒತ್ತುವರಿ ತೆರವು ಮಾಡುವ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಈ ಕೆಲಸ ಆಗದಿದ್ದರೆ ಮಳೆಯ ನೀರು ಭೂಮಿಯ ಒಡಲು ಸೇರುವುದಾದರೂ ಹೇಗೆ? ಕೆರೆಗಳು ಹಲವೆಡೆ ಕಸ ಹಾಗೂ ಕಲ್ಲು–ಮಣ್ಣು ಸುರಿಯುವ ತಾಣಗಳಾಗಿವೆ. ಅಂತರ್ಜಲ ಕುಸಿತಕ್ಕೆ ಇವು ಕೂಡ ಕಾರಣವಾಗಿವೆ. ಕೆರೆಗಳಿಗೆ ಕಾಯಕಲ್ಪ ನೀಡಬೇಕು. ಅಂತೆಯೇ ಕೆರೆಗಳ ಅಗತ್ಯ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಆಗಬೇಕು.

- ರೇಷ್ಮಾ ಜಿ.ಎಂ.,ಕೊಟ್ಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT