ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ 68 ಗ್ರಾಮಗಳಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿರುವ ಬಗ್ಗೆ ಮಾಧ್ಯಮ ವರದಿಗಳು ಬೆಳಕು ಚೆಲ್ಲಿವೆ.ಇಂತಹ ಆಧುನಿಕ ಯುಗದಲ್ಲೂ ಕೆಳವರ್ಗದವರ ಮೇಲೆ ಮೇಲ್ವರ್ಗದವರಿಂದ ಅನೇಕ ರೀತಿಯ ಶೋಷಣೆ ಆಗುತ್ತಿರುವುದು ಮಾನವ ಕುಲಕ್ಕೇ ಅವಮಾನ. ಬಸವಣ್ಣ, ಅಂಬೇಡ್ಕರ್ ಅವರಂತಹ ಮಹನೀಯರು ಅಸ್ಪೃಶ್ಯತೆ ಆಚರಣೆಯನ್ನು ಸಮಾಜದಿಂದ ಕಿತ್ತೊಗೆದರೂ ಅದರ ಬೇರು ಇನ್ನೂ ಇರುವುದು ಸಮಾಜದ ದುರ್ವಿಧಿ.