ದಲಿತರೇ ಕ್ಷೌರ ಕೌಶಲವನ್ನು ಬೆಳೆಸಿಕೊಳ್ಳಬಹುದಲ್ಲವೇ? ಇಲ್ಲಿ ನಮ್ಮ ದೌರ್ಬಲ್ಯಗಳೇ ಅಸ್ಪೃಶ್ಯತೆಯನ್ನು ಆಚರಿಸಲು ಅವಕಾಶ ಮಾಡಿಕೊಟ್ಟಂತಿವೆ. ಸ್ವಾಭಿಮಾನ ಎಂಬುದು ಕೇವಲ ಭಾಷಣ, ಪ್ರವಚನ, ಸಾಮಾಜಿಕ ಜಾಲತಾಣಗಳಿಗೆ ಸೀಮಿತಗೊಂಡಿದೆ ವಿನಾ ಕಾರ್ಯಗತವಾಗಿಲ್ಲ. ಬುದ್ಧ, ಅಂಬೇಡ್ಕರ್ ಹೆಸರು ಹೇಳಿಕೊಂಡು ಭಾಷಣ ಮಾಡುವವರು ಯುವಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಯುವಕರಿಗೆ ಬೇಕಾಗಿರುವುದು ಉದ್ಯೋಗವೇ ಹೊರತು ಉಚಿತ ಉಪದೇಶವಲ್ಲ. ಉಪವಾಸದಿಂದ ಬಳಲುತ್ತಿರುವವನಿಗೆ ಎಷ್ಟೇ ಉಪದೇಶ ನೀಡಿದರೂ ಪ್ರಯೋಜನವಾಗದು.