ಪ್ಲಾಸ್ಮಾ ಜಲ ವಿಜ್ಞಾನ ಕುರಿತ ನಾಗೇಶ ಹೆಗಡೆ ಅವರ ಲೇಖನ (ಪ್ರ.ವಾ., ಜೂನ್ 13) ಮಾಹಿತಿಪೂರ್ಣವಾಗಿತ್ತು. ಮಳೆಗಾಲದ ದಿನಗಳಲ್ಲಿ ಸಾಮಾನ್ಯವಾಗಿ ಆಗುವ ಗುಡುಗು– ಮಿಂಚಿನಲ್ಲಿ ಅಸಾಮಾನ್ಯ ವೈಜ್ಞಾನಿಕ ಕ್ರಿಯೆ ಉಂಟಾಗುವುದನ್ನು ಓದಿದಾಗ, ಈ ಸೃಷ್ಟಿಯು ತನ್ನಲ್ಲಿ ಅಡಗಿಸಿಕೊಂಡಿರುವ ಕೌತುಕಗಳ ಬಗ್ಗೆ ದಿಗ್ಭ್ರಮೆಯಾಯಿತು. ಹಸಿರಿಗೆ ಉಸಿರಾಗುವ ದೇವನು ಮಾನವರ ಮನ-ಮನಗಳಲ್ಲೂ ಮೇಳೈಸಿ, ಮನುಜ ಪಥವನ್ನು ಬೆಳೆಸಿದರೆ ಎಷ್ಟು ಚೆಂದ ಎನಿಸಿತು!