ಒಂದು ಕಡೆ ಕಬ್ಬಿಗೆ ಯೋಗ್ಯ ದರ ನೀಡದಿರುವುದು ಮತ್ತು ಕಬ್ಬು ಪೂರೈಸಿದ ಬಳಿಕ ರೈತರಿಗೆ ಸಕಾಲದಲ್ಲಿ ಹಣ ಪಾವತಿಸದಿರುವುದು, ಮತ್ತೊಂದು ಕಡೆ ಕಬ್ಬಿನ ತೂಕದಲ್ಲಿ ಮೋಸ, ರೈತರ ಶೋಷಣೆಗೆ ಹಲವಾರು ಮುಖಗಳು. ಸರ್ಕಾರ ಈ ಕುರಿತು ಗಮನಹರಿಸಿ, ಕಾರ್ಖಾನೆಗಳ ತೂಕದ ಯಂತ್ರಗಳಲ್ಲದೆ ಪ್ರತೀ ಕಾರ್ಖಾನೆಯ ವ್ಯಾಪ್ತಿಯಲ್ಲಿ ರೈತರ ಸ್ವಾಮ್ಯದ ಅಥವಾ ಸಹಕಾರಿ ಸಂಘಗಳ ಸ್ವಾಮ್ಯದ ತೂಕದ ಯಂತ್ರಗಳನ್ನು ಸ್ಥಾಪಿಸುವ ಮೂಲಕ ಕಾರ್ಖಾನೆಗಳಿಂದ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು.