ವನ್ಯಜೀವಿಗಳ ಬೇಟೆ ತಡೆಯಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ತಂತ್ರಜ್ಞಾನದ ಕೊರತೆ ಇದೆ. ಇನ್ನು ಸ್ಥಳೀಯರು ವನ್ಯಜೀವಿಗಳ ಬೇಟೆಯನ್ನು ತಡೆಯಲು ಪ್ರಯತ್ನಿಸಿದರೆ ಅವರ ಮೇಲೆಯೇ ಹಲ್ಲೆ ಅಥವಾ ಒತ್ತಡ ಎದುರಾಗುತ್ತದೆ. ಆದ್ದರಿಂದ ಹೊಸ ಕಾರ್ಯಪಡೆಯು ಪಿಡಿಒ, ಶಾಲಾ ಮಕ್ಕಳು, ಶಿಕ್ಷಕರು, ಸ್ಥಳೀಯವಾಸಿಗಳು, ಪರಿಸರಾಸಕ್ತರನ್ನು ಹೊಂದಿರಬೇಕು. ಇವರಿಗೆ ಅರಣ್ಯಾಧಿಕಾರಿಗಳ ನೇರ ಸಂಪರ್ಕ ಸಾಧ್ಯವಾದರೆ ಸಾಧ್ಯವಾದಷ್ಟು ಮಟ್ಟಿಗೆ ವನ್ಯಜೀವಿಗಳ ಬೇಟೆಯನ್ನು ತಡೆಯಬಹುದು.