ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಾಳೆ ಎಂಬ ಮಾಯಾ ಜಿಂಕೆ

Last Updated 27 ಅಕ್ಟೋಬರ್ 2021, 17:36 IST
ಅಕ್ಷರ ಗಾತ್ರ

‘ಭವಿಷ್ಯ ವಿಜ್ಞಾನ’ ದಾರಿದೀಪವಾಗಲಿ ಎಂಬ ಯೋಗಾನಂದ ಅವರ ಲೇಖನ (ಸಂಗತ, ಅ. 26) ಪ್ರಸ್ತುತ ಅಸ್ತಿತ್ವದಲ್ಲಿರುವ ನಮ್ಮಯ ಮನಃಸ್ಥಿತಿ, ಬದುಕಿನ ಅನಿಶ್ಚಿತತೆ ಬಗ್ಗೆ ಇರುವ ಭಯ ಮತ್ತು ಕಾಳಜಿಗೆ ಹಿಡಿದ ಕೈಗನ್ನಡಿಯಂತಿದೆ.

ಹೌದು, ನಾವೆಲ್ಲರೂ ವರ್ತಮಾನವನ್ನು ಅರಿಯದೆ ನಾಳೆ ಎಂಬ ಕಪೋಲಕಲ್ಪಿತ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಪ್ರಕೃತಿ ಹೇಗೆ ಬದಲಾವಣೆಗೆ ತನ್ನನ್ನು ಸದಾ ತೆರೆದುಕೊಳ್ಳುತ್ತದೆಯೋ ಹಾಗೇ ನಾವು ಕೂಡ ಮೂಢನಂಬಿಕೆಯಂತಹ ತರ್ಕರಹಿತ ಆಲೋಚನೆಗಳನ್ನು ಬಿಟ್ಟು ಭವಿತವ್ಯದ ಭರವಸೆಯಾದ ವಿಜ್ಞಾನವನ್ನು ಅಪ್ಪಿ ಒಪ್ಪಿಕೊಳ್ಳಬೇಕಾದ ಜರೂರತ್ತು ಖಂಡಿತ ಇದೆ.

ಅದಲ್ಲದೆ ಭವಿಷ್ಯದ ಆಶಾಭಾವದೊಂದಿಗೆ ಮುನ್ನಡೆಯಲು ಚಿಂತೆಗಿಂತ ಚಿಂತನೆ ಮುಖ್ಯವಾದುದು ಎಂಬ ಲೇಖಕರ ಗಟ್ಟಿ ನಿಲುವು ಸಮಯೋಚಿತವಾಗಿದೆ.

-ಆನಂದ ಕುಂಬಾರ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT