ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿಯ ಕಿಚ್ಚು ಹಾಯಿಸುವುದು, ಸಿಡಿ ಆಡುವುದು, ಕೊಂಡ ಹಾಯುವಂತಹ ಅಪಾಯಕಾರಿ ಆಚರಣೆಗಳು ಈಗಲೂ ನಡೆಯುತ್ತವೆ. ಕೊಂಡ ಹಾಯುವಾಗ ಆಯತಪ್ಪಿ ಬೆಂಕಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಅಥವಾ ಮೈಕೈ ಸುಟ್ಟುಕೊಂಡ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇಂತಹ ಕಾರ್ಯಕ್ರಮಗಳು ನಡೆಯುವಾಗ, ಕಾರ್ಯಕ್ರಮ ಆಯೋಜಕರು ಅಥವಾ ಧಾರ್ಮಿಕ ಸ್ಥಳಗಳ ಮುಖ್ಯಸ್ಥರು ಅಗ್ನಿಶಾಮಕದಂತಹ ಜೀವರಕ್ಷಕ ಮುನ್ನೆಚ್ಚರಿಕೆ ಕ್ರಮಗಳಿಗೆ ವ್ಯವಸ್ಥೆ ಮಾಡಬೇಕು. ಆಗ ಈ ಬಗೆಯ ಅವಘಡಗಳನ್ನು ತಪ್ಪಿಸಬಹುದು.