ಸಿಡಿ ಆಚರಣೆಯು ದಲಿತ ಮಹಿಳೆಯರನ್ನು ಅಪಮಾನಿಸುವ ಮತ್ತು ಅವರನ್ನು ಅಪಾಯಕ್ಕೆ ನೂಕುವ ಅನಿಷ್ಟ ಪದ್ಧತಿ. ರಾಜ್ಯ ಸರ್ಕಾರವು ಅಪಾಯಕಾರಿ, ಅಮಾನವೀಯಮೌಢ್ಯಗಳ ಆಚರಣೆಯನ್ನು ನಿಷೇಧಿಸುವ ಕಾನೂನನ್ನು ಇತ್ತೀಚೆಗೆ ಜಾರಿಗೊಳಿಸಿದೆ. ಈ ಕಾನೂನಿನ ಪ್ರಕಾರ, ಸಿಡಿ ಆಚರಣೆಯು ನಿಷೇಧಕ್ಕೆ ಒಳಗಾಗಿದೆ. ಅದೊಂದು ಶಿಕ್ಷಾರ್ಹ ಅಪರಾಧ. ಸಿಡಿ ಆಚರಣೆಗೆ ಕುಮ್ಮಕ್ಕು ಕೊಡುವುದು ಸಹ ಅಪರಾಧ. ತಾವು ಸಿಡಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅಲ್ಲ
ವೆಂದೂ, ಸಾಮಾನ್ಯ ವ್ಯಕ್ತಿಯಾಗಿ ಕೊಟ್ಟಿದ್ದಾಗಿಯೂ ರೇಣುಕಾಚಾರ್ಯ ಹೇಳಿದ್ದಾರೆ. ತಮ್ಮದೇ ಪಕ್ಷದ ನೇತೃತ್ವದ ಸರ್ಕಾರ ರೂಪಿಸಿರುವ ಸಮಾಜಮುಖಿ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರುವ ವಿಶೇಷ ಜವಾಬ್ದಾರಿಯು ಜನಪ್ರತಿನಿಧಿಗಳ ಮೇಲಿರುತ್ತದೆ. ಆದ್ದರಿಂದ ರೇಣುಕಾಚಾರ್ಯ ಅವರು ಕಾನೂನು ಕ್ರಮಗಳಿಂದಾಗಲೀ, ನೈತಿಕ ಹೊಣೆಗಾರಿಕೆಯಿಂದಾಗಲೀ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೇಣುಕಾಚಾರ್ಯ ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು.