ಶಾರದಾ ಗೋಪಾಲ ಅವರ ‘ಎಲ್ಲೂ ಸಲ್ಲದವಳು...’ ಎಂಬ ಲೇಖನ (ಪ್ರ.ವಾ., ಜ. 24) ಹಳ್ಳಿಯ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಕಷ್ಟದ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದೆ. ಹೆಚ್ಚಿನ ಮಾಹಿತಿ ಇಲ್ಲದ ನಿಯಮಗಳು ಜಾರಿಗೆ ಬಂದಾಗ ಜನ, ಏನುಮಾಡಬೇಕೆಂದು ತಿಳಿಯದೆ ತಮ್ಮ ಬಳಿ ಇರುವ ದಾಖಲೆಗಳೆಲ್ಲವನ್ನೂ ಹಿಡಿದು, ದುಡಿಮೆಯನ್ನು ಬಿಟ್ಟು ಇಡೀ ದಿನ ಸರದಿಯಲ್ಲಿ ನಿಲ್ಲುತ್ತಾರೆ. ಆಗ ಅವರಿಗಾಗುವ ನಷ್ಟವನ್ನು ಕಟ್ಟಿಕೊಡುವವರು ಯಾರು?