ಸಾರಿಗೆ ನೌಕರರು ಮುಷ್ಕರನಿರತರಾಗಿರುವ ಸಂದರ್ಭದಲ್ಲಿ, ಅವರಿಗೆ ಅನ್ನ ನೀಡುವ, ಅವರ ಕುಟುಂಬವನ್ನು ಸಲಹುವ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ತಿಳಿದು (ಪ್ರ.ವಾ., ಏ. 9) ಮನ ಕಲಕಿತು. ಬಹುತೇಕ ಚಾಲಕರ ಪಾಲಿಗೆ ಬಸ್ ದೇವರು ಇದ್ದ ಹಾಗೆ. ಬೆಳಿಗ್ಗೆ ಮುಕ್ತ ಮನಸ್ಸಿನಿಂದ ಕಸ ಸ್ವಚ್ಛಗೊಳಿಸಿ ನೀರು ಚಿಮುಕಿಸಿ ಹೂವಿನ ಮಾಲೆ ತೊಡಿಸಿ ಊದುಬತ್ತಿ ಬೆಳಗಿ ಕೈಮುಗಿದ ನಂತರವೇ ಪ್ರಯಾಣಿಕರನ್ನು ಬಸ್ಸಿನ ಒಳಗೆ ಹತ್ತಿಸಿಕೊಳ್ಳುವುದನ್ನು ಗಮನಿಸಿದ್ದೇನೆ. ಈ ಸಂಪ್ರದಾಯವನ್ನು ಬಹುತೇಕ ಚಾಲಕರು ಉಳಿಸಿಕೊಂಡು ಬಂದಿದ್ದಾರೆ. ಅಂಥ ಬಸ್ಗೆ ಕಲ್ಲು ಹೊಡೆಯುವವರೂ ಇದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ.