ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇಂದು ಕೊರೊನಾ ಹಿನ್ನೆಲೆಯಲ್ಲಿ ದೇಶದ ಜನರ ಒಳಿತಿಗಾಗಿ ಕೇಂದ್ರ ಸರ್ಕಾರ 21 ದಿನಗಳ ದಿಗ್ಬಂಧನ ವಿಧಿಸಿದೆ. ಅದನ್ನು ಲಕ್ಷಿಸದ ಕೆಲವರು ಗುಂಪು ಗುಂಪಾಗಿ ಸೇರಿ ಕೊರೊನಾ ವೈರಸ್ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ.
ನಮ್ಮ ಸೈನಿಕರು ಕೆಲವೊಮ್ಮೆ ಕೆಲ ದಿನಗಳ ಕಾಲ ನೀರು, ಆಹಾರದ ಬಗ್ಗೆ ಯೋಚಿಸದೆ ದೇಶದ ರಕ್ಷಣೆ ಮಾಡುವುದನ್ನು ನೆನಪು ಮಾಡಿಕೊಳ್ಳೋಣ. ಅನವಶ್ಯಕವಾಗಿ ಮನೆಯಿಂದ ಹೊರಬರದೆ, 21 ದಿನಗಳ ದಿಗ್ಬಂಧನ ಯಶಸ್ವಿಗೊಳಿಸೋಣ.