ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತಕುಮಾರ್ ಪ್ರತಿಕ್ರಿಯೆ: ವಿವೇಕಾನಂದರ ಈ ಸಾಲುಗಳನ್ನು ಗಮನಿಸಲಿ

ಅಕ್ಷರ ಗಾತ್ರ

ಕನಕದಾಸರಿಗೆ ಸಂಬಂಧಿಸಿದ ನನ್ನ ಹೇಳಿಕೆಗೆ ನಾನು ಕೊಟ್ಟ ಸಮರ್ಥನೆಗೆ ‘ಅವೈಜ್ಞಾನಿಕ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ವಿವೇಕಾನಂದರನ್ನು ಎಳೆದು ತಂದಿದ್ದಾರೆ’ ಎಂದು ಟಿ.ಸುರೇಂದ್ರ ರಾವ್ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ನ.19).

ಅವರು, ವಿವೇಕಾನಂದರ ಕೃತಿಶ್ರೇಣಿ ಸಂಪುಟ 7, (ಪರಿಷ್ಕೃತ 8ನೆಯ ಮುದ್ರಣ- 2012) ಅಧ್ಯಾಯ 26 ‘ಭಾರತದ ಮಹಿಳೆ’, ಪುಟ ಸಂಖ್ಯೆ 155ರಲ್ಲಿ ಇರುವ ‘ಮಗುವಿಗಾಗಿ ಪ್ರಾರ್ಥಿಸಬೇಕು’ ‘ಪ್ರಾರ್ಥನೆಯಿಲ್ಲದೆ ನಿಮ್ಮ ಮಕ್ಕಳು ಪ್ರಪಂಚಕ್ಕೆ ಕಾಲಿಟ್ಟರೆ ಅದೊಂದು ಮಾನವಕೋಟಿಗೆ ಕೊಟ್ಟ ಮಹಾಶಾಪ’ ಎಂಬ ಸಾಲುಗಳನ್ನು ಗಮನಿಸಲಿ. ಜೊತೆಗೆ, ಅವರು ಕೃತಾರ್ಥರಾಗಬೇಕೆಂದರೆ ಎಲ್ಲಾ ಸಂಪುಟಗಳನ್ನು ಅನುಭವಿಸುತ್ತಾ ಓದಲಿ.

ಡಾ. ಬಿ.ವಿ.ವಸಂತಕುಮಾರ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT