ಸರಳ ವಾಸ್ತುಶಾಸ್ತ್ರದೊಂದಿಗೆ ಜನರಿಗೆ ‘ಅದೃಷ್ಟದ ಮನೆ’ಯ ದಾರಿ ತೋರಿಸುತ್ತಿದ್ದ ವಾಸ್ತುಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಬರ್ಬರವಾಗಿ ಹತ್ಯೆಗೀಡಾಗಿದ್ದು ದುರದೃಷ್ಟಕರ. ಗುರೂಜಿ ಅವರ ಬದುಕು ಕೊಲೆಯಲ್ಲಿ ಪರ್ಯವಸಾನಗೊಂಡಿರುವುದು ದುಃಖದ ವಿಷಯ.
ಹಾಡಹಗಲೇ ಜನರ ಸಮ್ಮುಖದಲ್ಲಿ ಪ್ರಮುಖ ವ್ಯಕ್ತಿಯೊಬ್ಬರನ್ನು ಸುಲಭವಾಗಿ ಇರಿದು ಕೊಲ್ಲುವುದು ಎಷ್ಟೊಂದು ಸರಳ? ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ನಮ್ಮ ಪೊಲೀಸರ ಕಾರ್ಯದಕ್ಷತೆ ಮೆಚ್ಚುವಂಥದ್ದು.⇒