ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮನ ಕಲಕುವ ಘಟನೆಗೆ ಹೊಣೆ ಯಾರು?

Last Updated 17 ಮೇ 2022, 19:45 IST
ಅಕ್ಷರ ಗಾತ್ರ

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ 18 ಬಾಣಂತಿಯರಿಗೆ ಸಿಜೇರಿಯನ್ ಸಂದರ್ಭದಲ್ಲಿ ಹಾಕಿದ್ದ ಹೊಲಿಗೆ ಬಿಚ್ಚಿಕೊಂಡಿದ್ದು, ಕೀವು ತುಂಬಿ ಅವರು ನೋವಿನಿಂದ ನರಳುವಂತೆ ಆಗಿರುವುದು ಕರುಳು ಚುರುಕ್ ಎನ್ನುವಂತಹ ಪ್ರಕರಣ. ಆ ಹೆಣ್ಣುಮಕ್ಕಳು ವಿಪರೀತ ನೋವಿನಿಂದ ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂಥದ್ದು.

ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಅಮಾಯಕ ಬಾಣಂತಿಯರಿಗೆ ಆದ ತೊಂದರೆಯಿಂದ ಅವರ ಕುಟುಂಬದವರೂ ತೀವ್ರ ನೋವು ಅನುಭವಿಸುವಂತೆ ಆಗಿದೆ. ಇದಕ್ಕೆಲ್ಲ ಹೊಣೆಗಾರರು ಯಾರು? ಈ ಪ್ರಕರಣವನ್ನು ಆರೋಗ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿ, ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು.

–ಆರ್.ಬಿ.ಜಿ.ಘಂಟಿ, ಅಮೀನಗಡ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT