ಹರಕೆ ತೀರಿಸುವ ಸಲುವಾಗಿ ಅಷ್ಟೂ ಕಾಯಿಗಳನ್ನು ಒಡೆಯುವ ಬದಲು, ಒಂದೆರಡು ತೆಂಗಿನಕಾಯಿ ಒಡೆದು ಉಳಿದವನ್ನು ಬಡಬಗ್ಗರಿಗೆ, ಅನಾಥಾಶ್ರಮಕ್ಕೆ ಉಚಿತವಾಗಿ ನೀಡಿದ್ದರೆ ಪೊಲೀಸರ ದೈಹಿಕ ಶ್ರಮ, ಸಮಯದ ಉಳಿತಾಯವಾಗುತ್ತಿತ್ತು. ಇದರಿಂದ ಜನರಿಗೆ ಪೊಲೀಸರ ಮೇಲೆ ಗೌರವ ಭಾವನೆಯೂ ಹೆಚ್ಚಾಗುತ್ತಿತ್ತು.ನಮ್ಮ ಹರಕೆ, ಆಚರಣೆಗಳು ಸಮಾಜೋಪಕಾರಿಯಾಗಿ ಬದಲಾದರೆ ಬಹುಶಃ ದೇವರಿಗೂ ಖುಷಿಯಾಗುವುದೇನೋ.