ಸೇತುವೆ ನಿರ್ಮಾಣವೇ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ದೂರಿದ್ದರು. ಆದರೂ, ಇಲಾಖೆ ಎಂಜಿನಿಯರ್ ನಾಗರಾಜ್, ನಾನು ಅದೆಷ್ಟೋ ಸೇತುವೆ ನಿರ್ಮಾಣ ಮಾಡಿರುವೆ. ಕಾಮಿನಿ ನದಿಯ ನೀರು ಸೇತುವೆ ಅಡಿಯಲ್ಲಿಯೇ ಹರಿದು ಸಮುದ್ರ ಸೇರಲಿದೆ. ಸೇತುವೆ, ರಸ್ತೆಗೆ ಹಾನಿಯಾಗುವುದಿಲ್ಲ. ಸೇತುವೆ 100 ವರ್ಷ ಬಾಳಿಕೆ ಬರುತ್ತದೆ. ಜನರಿಗೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದರು.