ಕೊರೊನಾ ಸೋಂಕಿನಿಂದ ಆರ್ಥಿಕ ಚಟುವಟಿಕೆಗೆ ಬಾಧಕ ಆಗಬಾರದೆಂಬ ಕಾರಣಕ್ಕೆ ಸರ್ಕಾರ ಲಾಕ್ಡೌನ್ ಕೈಬಿಟ್ಟು, ಸೋಂಕಿತರ ಮನೆಯ ರಸ್ತೆಯನ್ನು ಸೀಲ್ಡೌನ್ ಮಾಡುತ್ತಿದೆ. ಈ ಕ್ರಮದಿಂದ ಕೆಲವು ಊರುಗಳಲ್ಲಿ ಎಲ್ಲಾ ರಸ್ತೆಗಳೂ ಒಂದೊಂದಾಗಿ ಸೀಲ್ ಆಗುತ್ತಿವೆ. ಇದರಿಂದ ವ್ಯಾಪಾರಿಗಳಿಗೆ, ನೌಕರರಿಗೆ, ಅಲ್ಲಿನ ನಿವಾಸಿಗಳಿಗೆ ಅನಗತ್ಯವಾಗಿ ತೊಂದರೆ ಆಗುತ್ತಿದೆ. ಉಪಕಾರಕ್ಕಿಂತ ಉಪದ್ರವವೇ ಹೆಚ್ಚಾಗಿರುವ ಈ ವ್ಯವಸ್ಥೆ ಅವೈಜ್ಞಾನಿಕ
ವಾದುದು. ಆದಕಾರಣ ಇನ್ನು ಮುಂದೆ ಸರ್ಕಾರವು ರಾಜ್ಯದಾದ್ಯಂತ ಸೋಂಕಿತರ ಮನೆಯನ್ನು ಮಾತ್ರ ಸೀಲ್ ಮಾಡಿ, ಅಕ್ಕಪಕ್ಕದ ಮನೆಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿ, ಸೋಂಕಿತರ ಮನೆಯ ಹೊರಗೆ ಒಬ್ಬ ರಕ್ಷಕರನ್ನು ನೇಮಿಸಬಹುದು. ಆ ಮನೆಯಲ್ಲಿರುವ ಸದಸ್ಯರಿಗೆ ಊಟ, ಉಪಾಹಾರದ ವ್ಯವಸ್ಥೆ, ಆರೋಗ್ಯ ಖಾತರಿಗಾಗಿ ತುರ್ತು ದೂರವಾಣಿ ಸಂಖ್ಯೆ ನೀಡಿ, ಸ್ಥಳೀಯರ ಸಹಕಾರ, ಸ್ವಯಂಸೇವಕರ ನೆರವಿನಿಂದಅತ್ಯುತ್ತಮವಾಗಿ ನಿಭಾಯಿಸಬಹುದು.