ಇವುಗಳಿಗೆಲ್ಲ ಹೊಣೆ ಯಾರು, ಈ ವ್ಯವಸ್ಥೆ ಸ್ವಚ್ಛವಾಗುವುದು ಯಾವಾಗ, ಹೀಗೆ ಪ್ರತೀ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಾ ಹೋದರೆ ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ಪಾಡೇನು, ಈ ಅಕ್ರಮಗಳ ನಡುವೆ ಪ್ರತಿಭಾವಂತ ಆಕಾಂಕ್ಷಿ ಗಳು ಮೂಲೆ ಗುಂಪಾದರೆ ಸಮಾಜವು ಉದಯೋನ್ಮುಖ ಬೆಳವಣಿಗೆ ಕಾಣುವುದಾದರೂ ಯಾವಾಗ? ಮುಂಬರುವ ನೇಮಕಾತಿಗಳಲ್ಲಾದರೂ ಸರ್ಕಾರ ಸುವ್ಯವಸ್ಥಿತವಾದ ಕಾನೂನು ಕ್ರಮಗಳನ್ನು ಜಾರಿಗೆ ತಂದು ಅಕ್ರಮಗಳಿಗೆ ಕಡಿವಾಣ ಹಾಕಲಿ.