ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂದಿಸುವ ಧಾಟಿ ಏಕೆ?

ಅಕ್ಷರ ಗಾತ್ರ

ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತು ರಾಜ್ಯ ಕೃಷಿ ಸಚಿವರು ಕೊಟ್ಟ ಹೇಳಿಕೆಯಲ್ಲಿ, ರೈತಪರ ಕಾಳಜಿಯೇನೋ ಇರಬಹುದು. ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಹೇಡಿಗಳು ಎಂದು ಕರೆದದ್ದು ಮಾತ್ರ ಸರಿಯಲ್ಲ. ದಿನೇ ದಿನೇ ರೈತರ ಬದುಕು ದುಸ್ತರವಾಗುತ್ತಿರುವ ಈ ಸಮಯದಲ್ಲಿ ಅವರಿಗೆ ಸಾಂತ್ವನ ಹೇಳುವ ಬದಲು, ನಿಂದಿಸುವ ಧಾಟಿಯಲ್ಲಿ ಹೇಳಿದರೆ ಹೇಗೆ ಸಹಿಸಿಕೊಳ್ಳುವುದು? ನಮ್ಮನ್ನಾಳುವವರ ಭಾಷೆ ಹಾಗೂ ಅವರ ಹೇಳಿಕೆಗಳು ಸಕಾರಾತ್ಮಕ ಪರಿಣಾಮ ಬೀರುವಂತೆ ಇರಲಿ.

- ನಾಗರಾಜ್ ಮಾದೇಗೌಡ,ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT