ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತು ರಾಜ್ಯ ಕೃಷಿ ಸಚಿವರು ಕೊಟ್ಟ ಹೇಳಿಕೆಯಲ್ಲಿ, ರೈತಪರ ಕಾಳಜಿಯೇನೋ ಇರಬಹುದು. ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಹೇಡಿಗಳು ಎಂದು ಕರೆದದ್ದು ಮಾತ್ರ ಸರಿಯಲ್ಲ. ದಿನೇ ದಿನೇ ರೈತರ ಬದುಕು ದುಸ್ತರವಾಗುತ್ತಿರುವ ಈ ಸಮಯದಲ್ಲಿ ಅವರಿಗೆ ಸಾಂತ್ವನ ಹೇಳುವ ಬದಲು, ನಿಂದಿಸುವ ಧಾಟಿಯಲ್ಲಿ ಹೇಳಿದರೆ ಹೇಗೆ ಸಹಿಸಿಕೊಳ್ಳುವುದು? ನಮ್ಮನ್ನಾಳುವವರ ಭಾಷೆ ಹಾಗೂ ಅವರ ಹೇಳಿಕೆಗಳು ಸಕಾರಾತ್ಮಕ ಪರಿಣಾಮ ಬೀರುವಂತೆ ಇರಲಿ.