ವನ್ಯಮೃಗ ಸಂರಕ್ಷಣೆಯಲ್ಲಿ ವಲ್ಮೀಕ್ ಥಾಪರ್ ತುಂಬಾ ಅನುಭವಿ. ಅವರು ಟಿ.ವಿ. ಸಂದರ್ಶನವೊಂದರಲ್ಲಿ ‘ನಾಯಿ, ಕತ್ತೆಕಿರುಬ, ಚಿರತೆಗಳು (leopard) ಚೀತಾಗಳನ್ನು ಕೊಲ್ಲಬಹುದು. ಅವು ವೇಗವಾಗಿ ಓಡಲು ತಕ್ಕ ಹುಲ್ಲುಗಾವಲು ಇಲ್ಲ. ಅವುಗಳ ಆಹಾರಕ್ಕಾಗಿ ಕೃಷ್ಣಮೃಗ, ಚಿಂಕಾರಾಗಳನ್ನು ಮೊದಲೇ ಸಾಕಬೇಕಿತ್ತು. ಚಿಕ್ಕೆ ಜಿಂಕೆಗಳನ್ನು ಬೇಟೆಯಾಡಲು ಹೋದಾಗ ಗಾಯಗೊಂಡರೆ ಸಾಯುವಷ್ಟು ಮೃದು ಪ್ರಾಣಿ ಅದು’ ಎಂದಿರುವುದು ಗಮನಾರ್ಹ. ಹಿಂದೆ ರಾಜರು ಅವುಗಳನ್ನು ಸಾಕಿ, ತರಬೇತಿ ನೀಡಿ, ಜಿಂಕೆಗಳನ್ನು ಬೇಟೆಯಾಡಲು ಉಪಯೋಗಿಸುತ್ತಿದ್ದುದು ತಿಳಿದ ಸಂಗತಿಯೇ.