ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಎಡಗೈಗೆ ಸೇರಿದ ಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ನಿಗದಿ ಮಾಡಿದೆ ಎಂದು ವರದಿಯಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈ ಜಾತಿಗಳು ಮೀಸಲಾತಿಗೆ ಮೊದಲನೇ ಅರ್ಹತೆ ಹೊಂದಿವೆ. ನಿಜಕ್ಕೂ ಅಸ್ಪೃಶ್ಯತೆಯ ಕರಾಳ ಮುಖದ ಅನುಭವ ಅವರಿಗೆ ಆಗಿರುವಷ್ಟು ಉಳಿದ ಜಾತಿ, ಸಮುದಾಯಗಳಿಗೆ ಆಗಿಲ್ಲ ಎಂದೇ ಹೇಳಬಹುದು.