ಮನುಷ್ಯನಿಗೆ ಅಪಘಾತವಾದರೆ ಆಂಬುಲೆನ್ಸ್ ಸಹಾಯದಿಂದ ಜೀವರಕ್ಷಣೆಗೆ ನೆರವಾಗಬಹುದು. ಆದರೆ ಪಶು– ಪಕ್ಷಿಗಳು ರಸ್ತೆ ಬದಿಯಲ್ಲಿ ಬಿದ್ದಿದ್ದ ವಿಷಾಹಾರ ತಿಂದು ಅಸ್ವಸ್ಥಗೊಂಡರೆ, ವಾಹನ ಅಪಘಾತಕ್ಕೆ ಒಳಗಾದರೆ ಎಷ್ಟೋ ಬಾರಿ ಸಕಾಲದಲ್ಲಿ ಚಿಕಿತ್ಸೆ ಲಭಿಸುವುದಿಲ್ಲ. ಇದರಿಂದ ಅವುಗಳ ಪ್ರಾಣಕ್ಕೇ ಕುತ್ತು ಬರುವುದುಂಟು. ಇದು ನೋವಿನ ಸಂಗತಿ. ಪಶು– ಪಕ್ಷಿಗಳಿಗೂ ಎಲ್ಲಾ ಊರಿನಲ್ಲೂ ವಿಶೇಷವಾದ ಆಂಬುಲೆನ್ಸ್ ಸೇವೆ ಒದಗಿಸಿ, ಸಂಬಂಧಿಸಿದವರ ಫೋನ್ ನಂಬರ್ ಎಲ್ಲರಿಗೂ ತಿಳಿಯುವಂತೆ ಮಾಡಬೇಕು. ಪ್ರಾಣಿ– ಪಕ್ಷಿಗಳ ಜೀವ ಉಳಿಸಲು ಎಲ್ಲರೂ ಪಣತೊಡಬೇಕು.