ಹೆಣ್ಣು ಭ್ರೂಣವನ್ನು ಕೊಲ್ಲುವ ಜನ; ಪದವಿ, ಸ್ನಾತಕೋತ್ತರ ಪದವಿ ಓದಿಸಿ, ವರದಕ್ಷಿಣೆ ನೀಡಿ ವರೋಪಚಾರ ಮಾಡಿ ‘ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗು ಮಗಳೇ’ ಎಂದು ಅಳುತ್ತಾ ಬೀಳ್ಕೊಡುವ ಜನ; ಮಕ್ಕಳಾಗದಿದ್ದರೆ ಬಂಜೆ ಎಂದು ಹೆಣ್ಣನ್ನು ಮಾತ್ರ ಜರಿಯುವ ಜನ; ಗಂಡು ಮಗುವಾಗಲಿಲ್ಲ ಎಂದು ಮಗನಿಗೆ ಇನ್ನೊಂದು ಮದುವೆ ಮಾಡಿ ಮೋಕ್ಷಕ್ಕಾಗಿ ಹಂಬಲಿಸುವ ಜನ; ತನ್ನ ಕೆಲಸ, ಓದು, ಬರವಣಿಗೆ, ಸಂಶೋಧನೆ ಇತ್ಯಾದಿಗಳ ಕಡೆಗಷ್ಟೇ ಗಮನಕೊಟ್ಟು ತನ್ನಿಷ್ಟದ ಉಡುಗೆ, ಅಲಂಕಾರ ಮಾಡಿಕೊಂಡು ಇರುವವರನ್ನು ಗಂಡುಬೀರಿ ಎನ್ನುವ ಜನ ಇರುವವರೆಗೂ ಹಳ್ಳಿ, ಪಟ್ಟಣ ಎಲ್ಲಾ ಕಡೆ ಇಂತಹ ಘಟನೆಗಳು ನಡೆಯುತ್ತವೆ.