ನಾಟಕ, ಸಿನಿಮಾ, ಟಿ.ವಿ. ಧಾರಾವಾಹಿಗಳಲ್ಲಿ ರಾಮಾಯಣದ ಕಥೆ ಬಿತ್ತರವಾಗುವುದು ಒಂದು ವಿಷಯ; ನಿಜಜೀವನದಲ್ಲಿ
ಪುರಾಣಪುರುಷರ ವೇಷ ಧರಿಸಿ ಸಭೆಗೆ ಬರಹೇಳಿ, ಅವರಿಗೆ ಆರತಿ ಬೆಳಗುವುದು ಯಾವ ಸಂಸ್ಕೃತಿಯ ದ್ಯೋತಕ? ಸಂವಿಧಾನ ರೀತ್ಯಾ ಪ್ರತಿಜ್ಞೆ ಸ್ವೀಕರಿಸಿ ಅಧಿಕಾರ ಹೊಂದಿದ ಒಬ್ಬ ವ್ಯಕ್ತಿಯು ಈ ರೀತಿಯಲ್ಲಿ ವರ್ತಿಸುವುದು ಎಷ್ಟು ಸಮಂಜಸ? ರಾಮನ ಕುರಿತಾದ ವ್ಯಕ್ತಿಗತವಾದ ನಂಬಿಕೆ ಇರುವುದು ಜನಸಾಮಾನ್ಯರಿಗೆ ಸಹಜ; ಆದರೆ ಅವನ ವೇಷಧರಿಸಿ ಬಂದ ವ್ಯಕ್ತಿಯನ್ನೇ ಪೂಜಿಸುವುದು ಪರಂಪರೆಗೆ, ನಂಬಿಕೆಗೆ, ಸಂವಿಧಾನ ಪ್ರಕಾರ ಹೊಂದಿದ ಅಧಿಕಾರಕ್ಕೆ ಅಪಚಾರವಲ್ಲವೇ?